ಅಮಿತ್ ಶಾ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ: ಲಕ್ಷ್ಮಿಶ

139

Get real time updates directly on you device, subscribe now.

ತುಮಕೂರು: ಗೃಹ ಸಚಿವ ಅಮಿತ್ ಷಾ ಅವರು ತುಮಕೂರಿಗೆ ಏಪ್ರಿಲ್ ೦೧ ರಂದು ಸಿದ್ದಗಂಗಾ ಮಠದಲ್ಲಿ ೧೧೫ನೇ ಡಾ. ಶಿವಕುಮಾರ ಮಹಾ ಸ್ವಾಮಿಗಳ ಜಯಂತೋತ್ಸವ ಹಾಗೂ ಗುರುವಂದನೆಗೆ ಆಗಮಿಸುವ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿಯು ೨೫ ನಿವರ್ಹಣಾ ಸಮಿತಿ ರಚನೆ, ಸುಮಾರು ೫೦೦ ಹೆಚ್ಚು ಕಾರ್ಯಕರ್ತರು, ಪ್ರಮುಖರು, ಪದಾಧಿಕಾರಿಗಳು ಸ್ವಾಗತಕ್ಕೆ ಭಾರಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮಿಶ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿನ ಐದು ಸರ್ಕಲ್ನಲ್ಲಿ ವಿಶೇಷ ಅಲಂಕಾರ, ೨೦ ಸಾವಿರ ಮೀಟರ್ ಬಂಟಿಕ್ಸ್, ೧೫೦೦ ಧ್ವಜಗಳಿಂದ ಅಮಿತ್ ಷಾ ಅವರು ಬಂದು ಹೆಲಿಪ್ಯಾಡ್ ನ ಶಿವಕುಮಾರ ಸ್ವಾಮಿಜಿ ಅವರ ವೃತ್ತದಿಂದ ಬಟವಾಡಿವರೆಗಿನ ೧.೬೫ ಕಿಲೋ ಮೀಟರ್ ರಸ್ತೆ ಉದ್ದಗಲಕ್ಕೆ ಅಲಂಕಾರಗೊಳಿಸಿ ಸರ್ವ ರೀತಿಯ ಸಿದ್ಧತೆ ಮಾಡಲಾಗುವುದು, ಸುಮಾರು ೧೦,೦೦೦ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಏಪ್ರಿಲ್ ೦೧ರ ದಿನದಂದು ಅಮಿತ್ ಷಾ ಅವರ ಸ್ವಾಗತಕ್ಕೆ ಆಗಮಿಸಲಿದ್ದಾರೆ, ಅಮಿತ್ ಷಾ ಅವರ ಕಾರ್ಯಕ್ರಮದ ಸಂಬಂಧ ಕಾರ್ಯಾಲಯದ ನಿರ್ವಹಣೆ, ಅತಿಥಿಗಳ ಸ್ವಾಗತ, ಧ್ವನಿವರ್ಧಕ ಮತ್ತು ಬೆಳಕು, ತಿಂಡಿ ನೀಡುವ ವ್ಯವಸ್ಥೆ, ಅಲಂಕಾರ, ವಾಹನ ನಿಲುಗಡೆ, ಸ್ವಚ್ಛತೆ, ರಂಗೋಲಿ, ಜಾನಪದ ವಾದ್ಯ ತಂಡ, ಅತಿಥಿಗಳ ಅನುಚರಣೆ, ರಕ್ಷಣೆ, ಹೆಲಿಪ್ಯಾಡ್ ನಿರ್ವಹಣೆ, ವೈದ್ಯಕೀಯ, ವಸತಿ, ಮಠದ ಜೊತೆ ಸಂಯೋಜನೆ ಇತ್ಯಾದಿ ೨೫ ಕಾರ್ಯಕ್ರಮದ ನಿರ್ವಹಣಾ ಸಮಿತಿ ರಚಿಸಿ ಯಶಸ್ವಿಗೊಳಿಸಲು ರೂಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಪ್ರಭಾರಿ ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಟಿ.ಭೈರಪ್ಪ, ಹೆಚ್.ಎನ್.ರವಿಶಂಕರ್, ವಕ್ತಾರ ಕೆ.ಪಿ.ಮಹೇಶ, ಸಹ ವಕ್ತಾರ ಟಿ.ಜೆ.ಸನತ್, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್ ಇದ್ದರು.

Get real time updates directly on you device, subscribe now.

Comments are closed.

error: Content is protected !!