ತ್ರಿವಿಧ ದಾಸೋಹಿಗೆ ಗುರುವಂದನೆ

ಜಗಮಗಿಸುತ್ತಿದೆ ಸಿದ್ದಗಂಗಾ ಮಠ- ಗಣ್ಯರ ಸ್ವಾಗತಿಸುತ್ತಿವೆ ಬೃಹತ್ ಕಟೌಟ್ಗಳು- ಎತ್ತ ನೋಡಿದರು ಬ್ಯಾನರ್ ರಂಗು

143

Get real time updates directly on you device, subscribe now.

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಶಿವ ಯೋಗಿಗಳವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಿದ್ದಗಂಗಾ ಮಠದಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ.

ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ, ಇದರೊಟ್ಟಿಗೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಂತ್ರಿಗಳು, ವಿವಿಧ ಮಠಾಧೀಶರು, ಗಣ್ಯರು ಶ್ರೀಗಳ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗಣ್ಯರ ಸ್ವಾಗತಕ್ಕಾಗಿ ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಹಿಡಿದು ಸಿದ್ದಗಂಗಾ ಮಠದ ವರೆಗೂ ಬ್ಯಾನರ್, ಫ್ಲೆಕ್ಸ್ಗಳು ರಾರಾಜಿಸುತ್ತಿವೆ, ಇನ್ನು ಮಠದಲ್ಲಿ ಎತ್ತ ನೋಡಿದರೂ ಹಬ್ಬದ ವಾತವಾರಣ, ತಳಿರು ತೋರಣ, ವಿವಿಧ ಅಲಂಕಾರದಲ್ಲಿ ಶ್ರೀಮಠ ಕಳೆಯಿಮದ ಕೂಡಿದೆ. ಬರುವ ಭಕ್ತರಿಗೆ ಸಿಹಿಯೂಟವೂ ಸಿದ್ಧವಾಗಿದೆ, ಒಟ್ಟಾರೆ ಶಿವಕುಮಾರ ಶ್ರೀಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ನಾಡಿನ ಹಬ್ಬದಂತೆ ಆಚರಿಸುವಂತಾಗಿರುವುದು ಹೆಮ್ಮೆಯ ಸಂಗತಿ.

Get real time updates directly on you device, subscribe now.

Comments are closed.

error: Content is protected !!