ಬಿಸಿಯೂಟ ಕಾರ್ಯಕ್ರಮಕ್ಕೆ ಶ್ರೀಗಳ ಹೆಸರು: ಸಿಎಂ

140

Get real time updates directly on you device, subscribe now.

ತುಮಕೂರು: ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ನಮ್ಮ ಸೌಭಾಗ್ಯ, ಶ್ರೀಗಳು ನಡೆದಾಡಿದ ಮಣ್ಣಿನಲ್ಲಿ ಭಕ್ತನಾಗಿ ಬಂದು ಅಳಿಲು ಸೇವೆ ಸಲ್ಲಿಸುವುದು ಪುಣ್ಯ ಎಂದು ಭಾವಿಸಿದ್ದೇನೆ ಎಂದರು.
ಶ್ರೀಗಳು ಧರ್ಮ ಗುರುಗಳು ಮಾತ್ರವಲ್ಲ ಬದುಕು ಕಟ್ಟಿಕೊಟ್ಟ ಪೂಜ್ಯರು, ದೂರದ ಉತ್ತರ ಕರ್ನಾಟಕದ ಬಡ ಮಕ್ಕಳ ಶಿಕ್ಷಣ ನೀಡಿ ಸ್ಮರಣೀರಾಗಿದ್ದಾರೆ, ಎಲ್ಲಾ ಧರ್ಮದ ಜನರನ್ನು, ಸಮುದಾಯದವರನ್ನು ಪ್ರೀತಿ ಮಾಡ್ತಿದ್ರು, ಸರ್ವೋದಯ, ಅಂತ್ಯೋದಯವನ್ನು ಮಠದಲ್ಲಿ ಕಾಣುತ್ತಿದ್ದೇವೆ, ಇದು ಇಡೀ ಕರ್ನಾಟಕದಲ್ಲಿ ಆಗುತ್ತಿದೆ ಎಂದರು.
ಯಡಿಯೂರಪ್ಪ ಅವರ ಮಾತಿನಂತೆ ದಾಸೋಹ ದಿನ ಕೋರಿದ್ದರು, ನಾವು ಮಾಡಿದ್ದೇವೆ, ಮಧ್ಯಾಹ್ನದ ಬಿಸಿಯೂಟಕ್ಕೆ ಶ್ರೀಗಳ ಹೆಸರು ಇಡುವಂತೆ ವಿಜಯೇಂದ್ರ ಸಹ ಮನವಿ ಮಾಡಿದ್ದಾರೆ, ಅದರಂತೆ ನಾವು ಸರಕಾರದಿಂದ ಆ ಹೆಸರು ಇಡುತ್ತೇವೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!