ನೀರಿನಲ್ಲಿ ಮುಳುಗಿ ವೃದ್ಧ ಸಾವು

ಈಜಲು ಹೋಗಿ ವ್ಯಕ್ತಿ ಸಾವು

207

Get real time updates directly on you device, subscribe now.

ಕುಣಿಗಲ್: ಯುಗಾದಿ ಹಬ್ಬಕ್ಕೆಂದು ಸ್ನೇಹಿತರ ಮನೆಗೆ ಆಗಮಿಸಿ ಹೊಸತೊಡಕಿನ ಹಬ್ಬದ ಅಂಗವಾಗಿ ಈಜಾಡಲು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಗುಣಿ ಕೆರೆಗೆ ಹೋಗಿದ್ದ ರಾಜು (೪೦) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ರಾಜು ಬೆಂಗಳೂರಿನ ಕಾವಲ್ ಭೈರಸಂದ್ರ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಪಟ್ಟಣದ ವಾಣಿಯಂಬಾಡಿ ಕಾಲೋನಿಯ ಸ್ನೇಹಿತನ ಮನೆಗೆ ಹಬ್ಬಕ್ಕೆಂದು ಆಗಮಿಸಿ, ಹಬ್ಬದ ನಂತರ ಈಜಾಡಲು ಕನ್ನಗುಣಿ ಕೆರೆಗೆ ಹೋಗಿದ್ದಾಗ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುಣಿಗಲ್:
ಪಟ್ಟಣದ ದೊಡ್ಡಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವ್ಯಕ್ತಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತನನ್ನು ಪಟ್ಟಣದ ಅಗ್ರಹಾರದ ವಾಸಿ ನರಸಿಂಹಯ್ಯ(೮೦) ಎಂದು ಗುರುತಿಸಲಾಗಿದೆ.
ಈತ ಒಬ್ಬಂಟಿಯಾಗಿದ್ದು ಸಂತೆಮೈದಾನ ಇತರೆಡೆಗಳಲ್ಲಿ ಹಮಾಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ, ದಾರಿಹೋಕರು ನೋಡಿ ವಿಷಯ ತಿಳಿಸಿದ ಮೇರೆಗೆ ಕುಣಿಗಲ್ ಪೊಲೀಸರು ಮೃತದೇಹ ಹೊರ ತೆಗೆದು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!