ಮರ ಬಿದ್ದು ಕಾರ್ಮಿಕ ಸಾವು

187

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕನ ಮೇಲೆ ಆಕಸ್ಮಿಕವಾಗಿ ಸಾರ್ವೇ ಮರ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಯಾದಗಿರಿ ಜಿಲ್ಲೆ ಹುಣಸಿ ತಾಲೂಕು ಬೈಲಕುಂಟೆ ಗ್ರಾಮದ ಶಿವಪ್ಪ (26) ಮೃತ ದುರ್ದೈವಿಯಾಗಿದ್ದು, ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ಸತೀಶ್ ಎಂಬುವರ ಮನೆ ನಿರ್ಮಾಣ ಕಾರ್ಯದಲ್ಲಿ ಶಿವಪ್ಪ ನಿರತನಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸಾರ್ವೇ ಮರ ಬಿದ್ದ ಪರಿಣಾಮ ಶಿವಪ್ಪನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕುಸಿದಿದ್ದಾನೆ, ಗಾಯಗೊಂಡ ಶಿವಪ್ಪನನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಶಿವಪ್ಪ ಅವಿವಾಹಿತನಾಗಿದ್ದು ಆತನ ಶವವನ್ನು ತುರುವೇಕೆರೆಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ದಂಡಿನಶಿವರ ಪೊಲೀಸರು ಯಾದಗಿರಿ ಜಿಲ್ಲೆಯಿಂದ ಶಿವಪ್ಪನ ಪೋಷಕರ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!