ಕೊಟ್ಟಿಗೆಗೆ ಬೆಂಕಿ ಬಿದ್ದು ಹಸು, ಕರು ದಹನ

407

Get real time updates directly on you device, subscribe now.

ಗುಬ್ಬಿ: ತಾಲ್ಲೂಕಿನ ಹೊದಲೂರು ಗ್ರಾಮದ ಚಂದ್ರಯ್ಯ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ೨ ಹಸು, ೧ ಕರು, ೩ ನಾಯಿ ಜೀವಂತ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಸಂಪೂರ್ಣವಾಗಿ ಕರಕಲಾಗುವಂತಹ ಸ್ಥಿತಿಗೆ ಪ್ರಾಣಿಗಳು ಬಂದಿದ್ದು ಕುಟುಂಬದ ರೋಧನೆ ಮನ ಮುಟ್ಟುವಂತಿತ್ತು. ಸುಮಾರು ೨ ಲಕ್ಷ ಮೌಲ್ಯದ ಕೊಟ್ಟಿಗೆ ಹಾಗೂ ಹಸುಗಳು ಬೆಂಕಿಗೆ ಆಹುತಿಯಾಗಿದ್ದು ಸರಕಾರದಿಂದ ಪರಿಹಾರ ನೀಡಿದರೆ ಬಡತನದಿಂದ ಬದುಕುತ್ತಿರುವಂತಹ ಕುಟುಂಬಗಳಿಗೆ ನೆರವಾಗುತ್ತದೆ ಎಂದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ವಿ.ಬಿ.ಆರತಿ ಅವರಿಗೆ ಮನವಿ ಮಾಡುತ್ತಿದ್ದರು.

ತಹಸೀಲ್ದಾರ್ ಆರತಿ ಮಾತನಾಡಿ, ಕೆಎಂಎಫ್ ನಲ್ಲಿ ಇನ್ಶೂರೆನ್ಸ್ ಮಾಡಿದ್ದಲ್ಲಿ ಅನುಕೂಲವಾಗುತ್ತದೆ ಅದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಮತ್ತು ಸರಕಾರದಿಂದ ಹೇಗೆ ಸಹಾಯಮಾಡಬಹುದು ಎಂಬುದನ್ನು ತಿಳಿಸಲಾಗುತ್ತದೆ ಸಧ್ಯಕ್ಕೆ ಪಶುವೈದ್ಯಾಧಿಕಾರಿಗಳು ಆಗಮಿಸಿದ ನಂತರ ಹೆಚ್ಚಿನ ಮಾಹಿತಿ ತಿಳಿಯುತ್ತದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!