ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ

128

Get real time updates directly on you device, subscribe now.

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿಕೊಂಡರು. ಹೂವಿನಿಂದ ಅಲಂಕೃತಗೊಂಡ ಸ್ವಾಮಿಯ ತೇರಿಗೆ ನಮಿಸಿ ಹೂವು, ಧವನ, ಬಾಳೆಹಣ್ಣುಗಳನ್ನು ಎಸೆದು ಭಕ್ತಿಯಿಂದ ನಮಿಸಿದರು.
ಈ ಸಂದರ್ಭಲ್ಲಿ ಮುಖಂಡರಾದ ಬಿ.ಆರ್ ರಂಗನಾಥ್, ಕೆಂಪೇಗೌಡ, ರಾಮಣ್ಣ, ಬಾವಿಮನೆ ಕಾಂತರಾಜು, ದಳವಾಯಿ ರಂಗರಾಜು, ಜಯರಾಮಯ್ಯ, ಪ್ರಧಾನ ಅರ್ಚಕ ಪದ್ಮನಾಭ, ಸಿಪಿಐ ಹನುಮಂತರಾಯಪ್ಪ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!