ವಿವಾಹಿತ ಮಹಿಳೆ ನೇಣಿಗೆ ಶರಣು

279

Get real time updates directly on you device, subscribe now.

ತುಮಕೂರು: ತವರು ಮನೆಗೆ ಹೋಗಿ ಗಂಡನ ಮನೆಗೆ ಬಂದ ಕೆಲವೇ ತಾಸಿನಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ದಿಲೀಪ್ ಎಂಬಾತನ ಪತ್ನಿ ಚೈತ್ರ ತುರುವೇಕೆರೆ ತಾಲೂಕಿನ ಸಂಪಿಗೆ ತನ್ನ ತಾಯಿ ಹಾಗೂ ಚೈತ್ರಾಳ ತಂಗಿ ಬಾಣಂತಿ ಆಗಿದ್ದ ಕಾರಣ ಬಾಣಂತಿ ಹಾಗೂ ಮಗುವನ್ನು ನೋಡಿಕೊಂಡು ಬರಲು ಹೋಗಿದ್ದ ಚೈತ್ರ ಎರಡು ದಿನ ತಡವಾದ ಕಾರಣ ಗಂಡ-ಹೆಂಡತಿ ನಡುವೆ ಮಾತಿನ ಘರ್ಷಣೆ ನಡೆದಿದೆ. ಈ ಸಂಬಂಧ ಜಗಳ ತಾರಕಕ್ಕೇರಿ ಸಾವಿನಲ್ಲಿ ಅಂತ್ಯವಾಗಿದೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರಕಾಶ್ ಗಾಯಿತ್ರಮ್ಮ ಎಂಬವರ ಎರಡನೇ ಮಗನಾದ ದಿಲೀಪನಿಗೆ ಕಳೆದ 9 ವರ್ಷದ ಹಿಂದೆ ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದ ಚೆನ್ನಕೇಶವ ಮೂರ್ತಿ ಕಮಲಾಕ್ಷಿ ಎಂಬವರ ಮೊದಲ ಮಗಳನ್ನು ಈತನಿಗೆ ಕೊಟ್ಟು ವಿವಾಹ ಮಾಡಿದರು. ಮೃತರ ಸಂಬಂಧಿಕರು ಹೇಳುವಂತೆ ಮದುವೆ ಮಾಡಿದಾಗಿನಿಂದಲೂ ಸಣ್ಣಪುಟ್ಟ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಮೃತಳಿಗೆ ಏಳು ವರ್ಷದ ಹೆಣ್ಣು ಮಗು ಇದ್ದು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತಳಾದ ಚೈತ್ರಳ ಗಂಡ ದಿಲೀಪ ಹಾಗೂ ಪ್ರಕಾಶ್ ಮತ್ತು ಗಾಯಿತ್ರಮ್ಮ ಪೊಲೀಸರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!