ಮಹಿಳೆಯ ಸರ ಕಸಿದು ದುಷ್ಕರ್ಮಿ ಪರಾರಿ

404

Get real time updates directly on you device, subscribe now.

ಕುಣಿಗಲ್: ಕುರಿ ಕಾಯುವ ಮಹಿಳೆಯ ಬಳಿ ಕುಡಿಯುವ ನೀರು ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಅಮೃತೂರು ಪೊಲೀಸ್ ಠಾಣೆಯ ಮಾರ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾರ್ಕೋನಹಳ್ಳಿ ಗ್ರಾಮದ ತಿಮ್ಮಮ್ಮ ಕುರಿ ಕಾಯುತ್ತಿರುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿ ತಿಮ್ಮಮ್ಮ ಕುಡಿಯಲು ಬಾಟಲಿಯಲ್ಲಿಟ್ಟಿದ್ದ ನೀರು ಕೇಳುವ ನೆಪದಿ ಹತ್ತಿರ ಬಂದು, ಆಕೆಯ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಮೃತೂರು ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!