ಕುಣಿಗಲ್: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೆ ಕುಟುಂಬದ ಮೂವರು ಮೃತಪಟ್ಟು ಮಗುವೊಂದು ತೀವ್ರ ಗಾಯಗೊಂಡ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮೃತ ಪಟ್ಟವರನ್ನು ಚನ್ನಪಟ್ಟಣದ ಜಾಮಿಯಾ ಮೊಹಲ್ಲದ ವಾಸಿ ಸೈಯದ್ ಮಹಮ್ಮದ್ ನಜ್ಮಿ (42), ಇವರ ಪತ್ನಿ ನಾಜಿಯಾ (32), ಮಗ ಸೈಯದ್ ಕುಂದನ್ ಹಸಿ (18 ತಿಂಗಳು) ಎಂದು ಗುರುತಿಸಲಾಗಿದೆ. ಇವರ ಎರಡು ವರ್ಷದ ಮಗ ಸೈಯದ್ ಕುಂದನ್ ನಬಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನಜ್ಮಿ ಕುಟುಂಬ ರಂಜಾನ್ ಹಬ್ಬ ಮುಗಿಸಿ ಚನ್ನಪಟ್ಟಣದ ಕಡೆಯಿಂದ ಕುಣಿಗಲ್ ಕಡೆಗೆ ಬರುವಾಗ ಬೀಸೆಗೌಡನದೊಡ್ಡಿಯ ಸಮೀಪದ ಬಸವಣ್ಣನ ಗುಡಿ ತಿರುವಿನಲ್ಲಿ ಮದ್ದೂರು ಕಡೆ ತೆರಳುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ನಜ್ಮಿ ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ನುಜ್ಜುಗುಜ್ಜಾಗಿ ಮೃತದೇಹ ಕಚ್ಚಿಕೊಂಡಿತು. ವಿಷಯ ತಿಳಿದ ಕೂಡಲೆ ಅಮೃತೂರು ಸಿಪಿಐ ಅರುಣ ಸೋಲಂಕಿ, ಹುಲಿಯೂರುದುರ್ಗ ಪಿಎಸೈ ಚೇತನ್ ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಗಾಯಾಳುಗಳ ಹೊರ ತೆಗೆದು ಚಿಕಿತ್ಸೆಗೆ ಕುಣಿಗಲ್ ಆಸ್ಪತ್ರೆಗೆ ಕಳಿಸಿದರು. ಮಾರ್ಗ ಮಧ್ಯೆ ನಾಜಿಯ ಹಾಗೂ ಮಗು ಹಸಿ ಮೃತಪಟ್ಟಿದೆ, ಕ್ರೇನ್ ಬಳಸಿ ಮೃತದೇಹ ಹೊರ ತೆಗೆದರು. ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ
Get real time updates directly on you device, subscribe now.
Prev Post
Next Post
Comments are closed.