ಮುಖ್ಯಮಂತ್ರಿ ಬದಲಾವಣೆ ಒಳಿತಲ್ಲ: ಶ್ರೀನಿವಾಸ್

186

Get real time updates directly on you device, subscribe now.

ಗುಬ್ಬಿ: ಮುಖ್ಯಮಂತ್ರಿ ವಿಚಾರ ಪಕ್ಷಕ್ಕೆ ಬಿಟ್ಟಿದ್ದು, ಆದರೂ ಕೂಡ 6 ತಿಂಗಳಿಗೆ ವರ್ಷಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಒಳಿತಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಸಿಂಗೋನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನೂರಾರು ಕನಸು ಆಸೆಗಳನ್ನು ಹೊತ್ತಂತಹ ಪ್ರತಿಭಾವಂತರಿಗೆ ಅಧಿಕಾರಿಗಳು ರಾಜಕೀಯ ಮುಖಂಡರೇ ತಪ್ಪುದಾರಿ ತೋರಿಸಿದರೆ ಬಡತನದ ಮಕ್ಕಳ ಪಾಡೇನು ಇಂತಹ ಘಟನೆಗಳಿಂದ ಸಾಕಷ್ಟುವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಇದನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಹೇಳಿಕೆಯ ಪ್ರಕಾರ ಬದಲಾವಣೆ ವಿಚಾರ ಪ್ರಸ್ತಾಪಿಸಿರುವುದರಿಂದ ಮುಖ್ಯಮಂತ್ರಿ ಪದವಿ ಬದಲಾವಣೆ ಆಗಬಹುದೇನೋ ಎಂದು ತಿಳಿಸಿದ ಸ್ಥಳೀಯ ಚುನಾವಣೆಯ ರೀತಿಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾಗುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಳಿತಲ್ಲ ಎಂದ ಅವರು ಮಾಜಿ ಸಚಿವ ಈಶ್ವರಪ್ಪ ನಂತರ ಪಿಎಸ್ಐ ಪ್ರಕರಣದಲ್ಲಿ ಮತ್ತೊಬ್ಬರ ಹೆಸರು ಕೇಳಿ ಬರುತ್ತಿದ್ದು ಸುಖಾಸುಮ್ಮನೆ ಆರೋಪ ಮಾಡುವುದಕ್ಕೆ ಸಾಧ್ಯವಿಲ್ಲ ಏನೋ ನಡೆದಿರಬೇಕು, ಹಾಗಾಗಿ ಕಾಂಗ್ರೆಸ್ ಪಕ್ಷ ಅವರ ಹೆಸರನ್ನ ತಂದಿರಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಗನ್ನಾಥ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕರೆತಿಮ್ಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಮಹದೇವಯ್ಯ, ಮಂಜುನಾಥ, ಜಯಲಕ್ಷ್ಮಿ, ಜಯಮ್ಮ, ಮುಖಂಡರಾದ ರಂಗಪ್ಪ, ಚನ್ನಬಸವೇಗೌಡ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!