ಬಾವಿಯಲ್ಲಿ ಮುಳುಗಿ ಯುವಕ ಸಾವು

265

Get real time updates directly on you device, subscribe now.

ಹೆಬ್ಬೂರು: ಈಜಾಡಲು ಬಾವಿಗಿಳಿದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬಳ್ಳಗೆರೆಯಲ್ಲಿ ನಡೆದಿದೆ.

ಯಶವಂತ್ ಗೌಡ (19) ಮೃತಪಟ್ಟ ಯುವಕ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಗ್ರಾಮದ ತೋಟದ ಬಾವಿಗೆ ತೆರಳಿದ್ದು, ಈಜಾಡುತ್ತಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಸಂಪೂರ್ಣವಾಗಿ ಈಜು ಬಾರದೆ ನೀರಿಗಿಳಿದಿದ್ದು, ಸುಸ್ತಾಗಿ ನಿತ್ರಾಣಗೊಂಡು ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಹೆಬ್ಬೂರು ಠಾಣೆ ಎಸ್ಐ ದೇವಿಕಾದೇವಿ, ಸಿಬ್ಬಂದಿಗಳಾದ ಪದ್ಮನಾಭ್, ಹೇಮಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!