ಅಪಘಾತದಲ್ಲಿ ಇಬ್ಬರ ದುರ್ಮರಣ

450

Get real time updates directly on you device, subscribe now.

ಪಾವಗಡ: ಗೂಡ್ಸ್ ವಾಹನ ಮುಂಬದಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ವ್ಯಕ್ತಿಯೋರ್ವ ಸಾವನ್ನಪ್ಪಿ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ಪಾವಗಡ ಹಾಗೂ ರಾಜವಂತಿ ನಡುವಿನ ವೃದ್ಧಾಶ್ರಮದ ಸಮೀಪ ನಡೆದಿದೆ.

ಈ ದುರ್ಘಟನೆಯಲ್ಲಿ ರಾಜಶೇಖರ್ (33) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ರಾಘವೇಂದ್ರ (45) ರಸ್ತೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಗಂಭೀರ ಸ್ಥಿತಿ ತಲುಪಿ ಕೂಡಲೇ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತರು ಆಂಧ್ರ ಮಡಕಶಿರಾ ತಾಲ್ಲೂಕಿನ ಡಿ.ರಾಮಗಿರಿ ಗ್ರಾಮದವರು ಎನ್ನಲಾಗಿದ್ದು, ಬೇಲ್ದಾರ್ ಕೆಲಸ ಮಾಡಿ ಬದುಕು ನಡೆಸುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಕೆಲಸದ ನಿಮಿತ್ತ ತನ್ನೂರು ರಾಮಗಿರಿಯಿಂದ ಪಾವಗಡಕ್ಕೆ ಬರುತ್ತಿದ್ದರು, ಇವರ ಹಿಂಬದಿಯಲ್ಲಿಯೇ ಗೂಡ್ಸ್ ವಾಹನ ಕೂಡ ಬರುತಿತ್ತು, ಚಾಲಕನ ಅತಿವೇಗದಿಂದ ನಿಯಂತ್ರಣಕ್ಕೆ ಬಾರದೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ, ಗೂಡ್ಸ್ ವಾಹನದ ಮುಂಭಾಗದ ಭಾಗಗಳು ನಜ್ಜುಗುಜ್ಜಾಗಿವೆ, ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಂತರವಷ್ಟೆ ಇನ್ನಷ್ಟು ಘಟನೆಯ ಮಾಹಿತಿ ಲಭ್ಯವಾಗಲಿದೆ.

Get real time updates directly on you device, subscribe now.

Comments are closed.

error: Content is protected !!