ಈಜಲು ಹೋಗಿ ಯುವಕ ಸಾವು

523

Get real time updates directly on you device, subscribe now.

ಮಧುಗಿರಿ: ದರ್ಗಾಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಯುವಕನೋರ್ವ ಪ್ರಾರ್ಥನೆಯ ನಂತರ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ಘಟನೆ ಶುಕ್ರವಾರ ನಡೆದಿದೆ.

ತುಮಕೂರಿನ ಗುಬ್ಬಿ ಗೇಟ್ ನಿವಾಸಿ ಆಸೀಫ್ (17) ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ದುರ್ದೈವಿ, ಈತನು ಶುಕ್ರವಾರ ಬೆಳಗ್ಗೆ ಮಧುಗಿರಿಯ ಸಿದ್ದಾಪುರದ ಸಮೀಪವಿರುವ ದರ್ಗಾಗೆ ಪ್ರಾರ್ಥನೆ ಸಲ್ಲಿಸಲು ತುಮಕೂರಿನಿಂದ ಬಂದಿದ್ದ ಎನ್ನಲಾಗಿದ್ದು, ಪ್ರಾರ್ಥನೆಯ ನಂತರ ತನ್ನ 4 ಜನ ಸ್ನೇಹಿತರೊಂದಿಗೆ ಸಿದ್ದಾಪುರ ಕೆರೆಯಲ್ಲಿ ಈಜಲು ಹೋಗಿ ಆಳಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದು, ಈ ಸಂದರ್ಭದಲ್ಲಿ ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದ್ದರೂ ಫಲಕಾರಿಯಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವ ಹೊರ ತೆಗೆದಿದ್ದು, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!