ಆಟೋ ಪಲ್ಟಿ- ಓರ್ವ ಸಾವು

257

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಹಡವನಹಳ್ಳಿ ಜನತಾ ಕಾಲೋನಿ ಬಳಿ ಕೊಂಡ್ಲಿ ಕ್ರಾಸ್- ದಂಡಿನಶಿವರ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ತೀವ್ರತರ ಗಾಯಗೊಂಡು ನಾಲ್ವರು ಆಸ್ಪತ್ರೆ ಸೇರಿದ್ದಾರೆ.

ಆಟೋ ಉರುಳಿಬಿದ್ದ ಪರಿಣಾಮ ತುಮಕೂರು ತಾಲೂಕು ಕುಪ್ಪೂರು ಗ್ರಾಮದ ವಾಸಿ ಲಕ್ಷ್ಮೀರಂಗಯ್ಯ (40) ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕೊಂಡ್ಲಿ ಕ್ರಾಸ್ ನಿಂದ ದಂಡಿನ ಶಿವರದತ್ತ ಹೊನ್ನಮ್ಮನ ಜಾತ್ರೆಗೆ ಪ್ರಯಾಣಿಕರನ್ನು ಕರೆದೊಯ್ಯುವ ವೇಳೆ ಹಡವನಹಳ್ಳಿ ಜನತಾ ಕಾಲೋನಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಸ್ಥಳದಲ್ಲೆ ಮೃತಪಟ್ಟವನ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ತೀವ್ರ ಗಾಯಗೊಂಡ ನಾಲ್ವರು ಆಟೋ ಪ್ರಯಾಣಿಕರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಾಳುಗಳ ವಿಳಾಸ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಘಟನೆಯ ಸ್ಥಳದಿಂದ ಆಟೋ ಚಾಲಕ ಪರಾರಿಯಾಗಿದ್ದಾನೆ.
ಘಟನೆಯ ಸ್ಥಳಕ್ಕೆ ಪಿ.ಎಸ್.ಐ ರಾಮಚಂದ್ರಪ್ಪ, ಮುಖ್ಯಪೇದೆ ಮಹಾದೇವ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಸೋದರ ಕುಮಾರ್ ನೀಡಿದ ದೂರಿನ ಮೇರೆಗೆ ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!