ಚೌಡೇಶ್ವರಿ ಸನ್ನಿಧಿಗೆ ನಟ ದರ್ಶನ್ ಭೇಟಿ

274

Get real time updates directly on you device, subscribe now.

ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಕೆ.ಜಿ.ದೇವಪಟ್ಟಣ ಗ್ರಾಮದಲ್ಲಿನ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದಲ್ಲಿ ನೂತನ ದೇವಾಲಯ, ವಿಗ್ರಹ ಪ್ರತಿಷ್ಠಾಪನೆ, ವಿಮಾನಗೋಪುರ, ರಾಜಗೋಪುರ ಉದ್ಘಾಟನೆ, ಅಷ್ಟಬಂಧ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಅದ್ದೂರಿಯಿಂದ ಆರಂಭಗೊಂಡವು.

ಶುಕ್ರವಾರ ನಡೆದ ಪ್ರತಿಷ್ಠಾಪನೆ, ಅಷ್ಟಬಂಧ, ಕುಂಭಾಭಿಷೇಕ ಪೂರ್ವಕ ಧಾರ್ಮಿಕ ವಿಧಿವಿಧಾನ ಹೋಮಾದಿ ಕಾರ್ಯಕ್ರಮಗಳನ್ನು ಕ್ಷೇತ್ರದ ಮಠಾಧೀಶ ಬಾಲಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಪಟ್ಟನಾಯಕನ ಹಳ್ಳಿಯ ನಂಜಾವಧೂತ ಶ್ರೀಗಳು, ಶ್ರೀರಂಗಪಟ್ಟಣದ ಸಮಯಪುರಂ ಆಶ್ರಮದ ಸುರೇಶ್ವರ ಆಚಾರ್ಯ, ಚಿತ್ರದುರ್ಗ ಬೆಲಗೂರು ಕ್ಷೇತ್ರದ ವಿಜಯ ಮಾರುತಿ ಶ್ರೀಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರನಟ ದರ್ಶನ್ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ, ಗೊಶಾಲೆ ಉದ್ಘಾಟಿಸಿ, ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದು, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

Get real time updates directly on you device, subscribe now.

Comments are closed.

error: Content is protected !!