ಭೀಕರ ಅಪಘಾತ- ಮೂವರ ದರ್ಮರಣ

518

Get real time updates directly on you device, subscribe now.

ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಿಂದ ಹಾರಿ ವಿರುದ್ಧ ಪಥದಲ್ಲಿ ಬರುತ್ತಿದ್ದ ಟೆಂಪೋ ಟ್ರಾವಲರ್ ಗೆ ಮುಖಾಮುಖಿ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೆ ಸಾವನ್ನಪ್ಪಿ ಎಂಟು ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಬೈಪಾಸ್ ನ ಬೇಗೂರು ಗ್ರಾಮದ ಬಳಿ ನಡೆದಿದೆ.

ಮೃತರನ್ನು ಕಾರಿನಲ್ಲಿದ್ದ ಹಾಲಿ ಬೆಂಗಳೂರಿನ ಸಂಜಯನಗರ ವಾಸಿ ರಘು (33), ಮೂಲ ಸೊಪ್ಪನಹಳ್ಳಿ, ಕೊಂಡಜ್ಜಿ ಹೋಬಳಿ, ತುರುವೇಕೆರೆ ತಾಲೂಕು, ಇವರ ಸ್ನೇಹಿತರಾದ ರಾಕೇಶ (26) ಹಾಗೂ ಬೆಂಗಳೂರು ಮತ್ತಿಕೆರೆ ವಾಸಿ ವಿಜಯಕುಮಾರ (46) ಸ್ಥಳದಲ್ಲೆ ಮೃತಪಟ್ಟಿದ್ದು, ಚಾಲಕ ಲೋಕೇಶ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೋಕೇಶ್ ಹಾಗೂ ರಘು ಸಂಬಂಧಿಗಳಾಗಿದ್ದು ಕಾರ್ಯ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದರು. ಮಂಗಳವಾರ ಬೆಳಗಿನ ಜಾವ ಎರಡು ಗಂಟೆ ವೇಳೆಯಲ್ಲಿ ಕುಣಿಗಲ್ ಬೈಪಾಸ್ ನ ಬೇಗೂರು ಗ್ರಾಮದ ಬಳಿ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿ ಹಾರಿ ವಿರುದ್ಧ ಪಥದಲ್ಲಿ ಬೆಂಗಳೂರಿಗೆ ಹೊರಟಿದ್ದ ಟೆಂಪೋ ಟ್ರಾವಲರ್ ಗೆ ಮುಖಾಮುಖಿ ಗುದ್ದಿದೆ, ಬೆಂಗಳೂರು ಬೊಮ್ಮನಹಳ್ಳಿಯ ಮಂಜುನಾಥ ಮತ್ತು ಕುಟುಂಬದವರು ಧರ್ಮಸ್ಥಳ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು, ಟಿಟಿ ಚಾಲಕ ವಸಂತ್ ಸೇರಿದಂತೆ ಎಂಟು ಮಂದಿ ಗಾಯಗೊಂಡರು. ಘಟನೆ ನಡೆದ ಸ್ಥಳಕ್ಕೆ ಕುಣಿಗಲ್ ಪೊಲೀಸರು ತೆರಳಿ ತಡರಾತ್ರಿಯೇ ಗಾಯಾಳುಗಳನ್ನು ಕುಣಿಗಲ್ ಹಾಗೂ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ಕಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!