ಅಪಘಾತದಲ್ಲಿ ಶಿಕ್ಷಕ ದಂಪತಿ ಸಾವು

1,023

Get real time updates directly on you device, subscribe now.

ಗುಬ್ಬಿ: ತುಮಕೂರು ಹಾಗೂ ಗುಬ್ಬಿ ಮಧ್ಯೆ ಮಲ್ಲಸಂದ್ರ ಬ್ರಿಡ್ಜ್ ಮೇಲೆ ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಶಿಕ್ಷಕ ದಂಪತಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ತುಮಕೂರಿನ ಹೆಗ್ಗೆರೆಯಿಂದ ಕಾರಿನಲ್ಲಿ ಗುಬ್ಬಿ ತಾಲ್ಲೂಕಿನ ಅವರ ಸ್ವ ಗ್ರಾಮ ತೆವೆಡೆಹಳ್ಳಿ ಗ್ರಾಮಕ್ಕೆ ತೆರುಳುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಈಶ್ವರಪ್ಪ (52) ಗುಬ್ಬಿಯ ಬಿಆರ್ಸಿ ಕಚೇರಿಯಲ್ಲಿ ಬಿಆರ್ಪಿ ಯಾಗಿ ಕೆಲಸ ನಿರ್ವಹಿಸುತ್ತಿದ್ದರು, ಇನ್ನೂ ಅವರ ಪತ್ನಿ ಕಲ್ಪನ (50) ಗುಬ್ಬಿಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಈಶ್ವರಪ್ಪ ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಗುಬ್ಬಿ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಅವರ ಪತ್ನಿ ಕಲ್ಪನಾ 28 ವರ್ಷಗಳ ಕಾಲ ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ತಾಲ್ಲೂಕಿನ ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ.
ಮೃತರಿಗೆ ಇಬ್ಬರು ಮಕ್ಕಳಿದ್ದಾರೆ, ಅವರ ಅಂತಿಮ ದರ್ಶನಕ್ಕೆ ಗುಬ್ಬಿಯ ಬಿಆರ್ಸಿ ಕಚೇರಿಯಲ್ಲಿ ಇಡಲಾಗಿತ್ತು, ಕ್ಷೇತ್ರ ಶಿಕ್ಷ ಣಾಧಿಕಾರಿ ಸೋಮಶೇಖರ್, ಅಕ್ಷರ ದಾಸೋಹದ ನಿರ್ದೇಶಕ ಯೋಗಾನಂದ, ಬಿಆರ್ಸಿ ಸಿದ್ದಲಿಂಗಸ್ವಾಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!