ಖಡಕ್ ಪಾಠ ಹೇಳಿದ್ರು ಎಸ್ ಪಿ ಸಾಹೇಬ್ರು!

137

Get real time updates directly on you device, subscribe now.

ಗುಬ್ಬಿ: ತಾಲೂಕಿನಲ್ಲಿ ವಾಹನಗಳು ನಿರಂತರವಾಗಿ ಓಡಾಡುತ್ತಲೇ ಇವೆ ಇಲ್ಲಿ ಲಾಕ್ ಡೌನ್ ಹಾಗಿದೆ ಅನ್ನುವುದೇ ಅನುಮಾನ ಎಂದು ಚಾಟಿ ಬೀಸಿದ ಒಂದು ಗಂಟೆಯಲ್ಲೇ ಇಡೀ ಗುಬ್ಬಿ ನಗರ ಹಾಗೂ ತಾಲೂಕಿನಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಅನಗತ್ಯವಾಗಿ ಬೀದಿಗಿಳಿದ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಬ್ರೇಕ್ ಹಾಕಿದ್ದಾರೆ. ವಾಹನ ಸವಾರರಿಗೆ ದಂಡ ವಿಧಿಸಿ ಮನೆಗೆ ಕಳಿಸಿದ್ದಾರೆ.
ತಾಲೂಕಿನ ಗಡಿ ಭಾಗಗಳಲ್ಲಿ ಪೊಲೀಸರು ಸರ್ಪ ಗಾವಲು ಹಾಕಿದ್ದು ಈ ನಡುವೆ ಖುದ್ದು ಎಸ್ ಪಿ ವಂಶಿ ಕೃಷ್ಣ ರಸ್ತೆಗೆ ಇಳಿದು ಅನಗತ್ಯವಾಗಿ ಓಡಾಡುವರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಲು ಮುಂದಾಗಿದ್ದಾರೆ.
ಜನತೆಗೆ ಲಾಕ್ ಡೌನ್ ಅರಿವು ಮೂಡಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ತುಮಕೂರು ಹಳದಿ ಜೋನ್‍ ಗೆ ಸೇರಿರುವುದು ಕೊಂಚ ನೆಮ್ಮದಿ ತಂದಿದ್ದರೂ ಸೋಂಕಿನ ಸುಳಿವು ಸಿಗದಾಗೆ ಮಾಡಿ ಎಂದು ಖಡಕ್‍ ಸೂಚನೆ ನೀಡಿರುವ ಸಚಿವರ ಅಜ್ಞೆಗೆ ಜಿಲ್ಲಾಧಿಕಾರಿ ಕೆ.ರಾಕೇಶ್‍ ಕುಮಾರ್ ಹಾಗೂ ಎಸ್ ಪಿ ವಂಶಿಕೃಷ್ಣ, ಆಯುಕ್ತ ಭೂಬಾಲನ್ ಅವರ ನಿಷ್ಟಾವಂತ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ಕೇಳಿ ಬರುತ್ತಿದೆ.

Get real time updates directly on you device, subscribe now.

Comments are closed.

error: Content is protected !!