ಲಾರಿ ಡಿಕ್ಕಿ- ಯುವಕ ಸಾವು

328

Get real time updates directly on you device, subscribe now.

ತುಮಕೂರು: ಬೈಕ್ ಸವಾರನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ತುಮಕೂರಿನ ಹೆಗ್ಗೆರೆಯ ನಿವಾಸಿ ಮಂಜುನಾಥ ರಾಜ್ ಅರಸ್ (37) ಎಂಬ ವ್ಯಕ್ತಿ ಸಾಗುತ್ತಿದ್ದ ಬೈಕ್ ಗೆ ಲಾರಿಯೊಂದು ಗುದ್ದಿದ ಪರಿಣಾಮ ಬೈಕ್ ಸವಾರ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಬೈಕ್ ಸವಾರನಿಗೆ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರನ ದೇಹ ಸಂಪೂರ್ಣ ಚಿದ್ರವಾಗಿತ್ತು. ಇನ್ನು ಮೃತಪಟ್ಟ ಮಂಜುನಾಥ್ ತುಮಕೂರಿನ ಹಿರೇಹಳ್ಳಿಯ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಕೆಲಸಕ್ಕೆಂದು ತೆರಳುವ ವೇಳೆ ಬುಧವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಘಟನೆ ಸಂಬಂಧ ತುಮಕೂರಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!