ಭೀಕರ ಬೈಕ್ ಅಪಘಾತ- ನಾಲ್ವರ ದುರ್ಮರಣ

217

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಶೆಟ್ಟಿಗೊಂಡನಹಳ್ಳಿ ಬಳಿ ಕೆ-ಶಿಪ್ ರಸ್ತೆಯಲ್ಲಿ ಮೂರು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟಿದ್ದು, ಇಬ್ಬರು ತೀವ್ರತರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಗಿನ್ನೇನಹಟ್ಟಿಯ ವಾಸಿಗಳಾದ ಭೂತೇಶ್ (30), ಶಶಿ (25), ಹಿಂಡಿಸ್ಕೆರೆ ಗ್ರಾಮದ ರಂಗನಾಥ್ (30) ಹಾಗೂ ಆಂಧ್ರಪ್ರದೇಶದ ರೊಳ್ಳೇ ಗ್ರಾಮದ ಲೋಕೇಶ್ (29) ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಗುಬ್ಬಿ ತಾಲೂಕಿನ ಹಿಂಡಿಸ್ಕೆರೆ ಗ್ರಾಮದ ರಂಗನಾಥ್ ಮತ್ತು ಕಂಬಯ್ಯನಪಾಳ್ಯದ ರವೀಶ್ ಎಂಬುವರು ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ತಮ್ಮ ಸ್ವಗ್ರಾಮದತ್ತ ಕೆಶಿಪ್ ರಸ್ತೆಯ ಮುಖಾಂತರ ಹಿಂತಿರುಗುತ್ತಿದ್ದರು. ಈ ವೇಳೆ ಶೆಟ್ಟಿಗೊಂಡನಹಳ್ಳಿ ಬಳಿ ಕೆಶಿಪ್ ರಸ್ತೆಯಲ್ಲಿ ಗುಬ್ಬಿ ಕಡೆಯಿಂದ ಹಿರೋ ಹೋಂಡಾ ಬೈಕ್ ನಲ್ಲಿ ನಾಲ್ವರು ಒಂದೇ ಬೈಕ್ನಲ್ಲಿ ಎದುರಾಗಿದ್ದಾರೆ. ಅದೇ ಮಾರ್ಗವಾಗಿ ಸಾಗುತ್ತಿದ್ದ ಟಾಟಾ ಏಸ್ ವಾಹನವನ್ನು ಹಿಂದಿಕ್ಕುವ ಧರದಲ್ಲಿದ್ದ ಹಿರೋ ಹೋಂಡಾ ಬೈಕ್ ಹಿಂಡಿಸ್ಕೆರೆ ಗ್ರಾಮದ ರಂಗನಾಥ್ ಚಾಲನೆ ಮಾಡುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮವಾಗಿ ಹೀರೋ ಹೋಂಡಾ ಬೈಕ್ನಲ್ಲಿದ್ದ ಮೂವರು ಹಾಗೂ ಪಲ್ಸರ್ ಬೈಕ್ ಚಾಲನೆ ಮಾಡುತ್ತಿದ್ದ ರಂಗನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಗನಾಥ್ ಚಾಲನೆ ಮಾಡುತ್ತಿದ್ದ ಬೈಕ್ಗೆ ಹಿಂದೆ ಡಿಸ್ಕವರ್ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ ರವೀಶ್ ಆಯತಪ್ಪಿ ಡಿಕ್ಕಿ ಹೊಡೆದು ಕೆಳಗುರುಳಿ ತೀವ್ರತರ ಗಾಯಗೊಂಡು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಹಿರೋ ಬೈಕ್ನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಅದೇ ಬೈಕ್ನಲ್ಲಿದ್ದ ನವೀನ್ (26) ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಾಹುಲ್ಕುಮಾರ್ ಶಹಾಪುರ ವಾಡ್, ಶಾಸಕ ಮಸಾಲ ಜಯರಾಮ್, ಡಿವೈಎಸ್ಪಿ ರಮೇಶ್, ಸಿಪಿಐ ಗೋಪಾಲನಾಯ್ಕ, ಪಿಎಸ್ಐ ಕೇಶವಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಗಾಯಾಳು ರವೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ತುರುವೇಕೆರೆ ಪೊಲೀಸ್ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!