ಪೊಲೀಸ್ ಠಾಣೆಯಲ್ಲಿ ಕೆರೆ ಹಾವು ರಕ್ಷಣೆ

294

Get real time updates directly on you device, subscribe now.

ತುಮಕೂರು: ನಗರದ ರಿಂಗ್ ರೋಡ್ ನಲ್ಲಿರುವ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕೆರೆ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

ಠಾಣೆಯ ರೆಕ್ಸಾರ್ ರೂಮ್ ನಲ್ಲಿ ಹಾವನ್ನ ಕಂಡ ಸಿಬ್ಬಂದಿ ನಾಗರಾಜು ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಮತ್ತು ಸಚಿನ್ ಗೌಡ ಬೀರುವಿನ ಹಿಂದೆ ಸೇರಿಕೊಂಡಿದ್ದ ಸುಮಾರು 4.5 ಅಡಿ ಉದ್ದದ ಕೆರೆ ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576ಕ್ಕೆ ಕರೆ ಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!