ಕೊಬ್ಬರಿ ಕದ್ದ ಕಳ್ಳರು

282

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಗೂರಲಮಠ ಗ್ರಾಮದ ರೈತ ಮಹಿಳೆ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಲಾಗಿದ್ದ 2 ಸಾವಿರ ಕೊಬ್ಬರಿಯನ್ನು ಬುಧವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ.

ಗೂರಲಮಠ ಗ್ರಾಮದ ರೈತ ಮಹಿಳೆ ಮಂಜುಳಾ ಎಂಬುವರು ತಮ್ಮ ವಾಸದ ಮನೆಯ ಪಕ್ಕದಲ್ಲಿನ ಕೊಟ್ಟಿಗೆಯಲ್ಲಿ ಸುಮಾರು 4 ಸಾವಿರ ಕೊಬ್ಬರಿ ದಾಸ್ತಾನು ಮಾಡಿದ್ದರು. ರೈತ ಮಹಿಳೆ ದಾಸ್ತಾನು ಮಾಡಿ ಬೆಂಗಳೂರಿಗೆ ಕಾರ್ಯ ನಿಮಿತ್ತ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೊಟ್ಟಿಗೆಯ ಬೀಗ ಮುರಿದ ಕಳ್ಳರು 2 ಸಾವಿರ ಕೊಬ್ಬರಿ ಹೊತ್ತೊಯ್ದಿದ್ದಾರೆ. ಕೊಬ್ಬರಿಯನ್ನು ವಾಹನಕ್ಕೆ ತುಂಬಿರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ತುರುವೇಕೆರೆ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!