ಕಾರು ಅಪಘಾತದಲ್ಲಿ ಇಬ್ಬರ ಸಾವು- 11 ಮಂದಿಗೆ ಗಾಯ

266

Get real time updates directly on you device, subscribe now.

ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಡಿವೈಡರ್ ಹಾರಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಟೆಂಪೊ ಟ್ರಾವೆಲರ್, ಬುಲೆಟ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಹನ್ನೊಂದು ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ನ ಬೇಗೂರು ಗ್ರಾಮದ ಬಳಿ ಶನಿವಾರ ಬೆಳಗಿನ ಜಾವ ನಡೆದಿದೆ.

ಮೃತ ಪಟ್ಟವರನ್ನು ಕಾರಿನಲ್ಲಿದ್ದ ಹೊಳೆನರಸಿಪುರ ತಾಲೂಕಿನ ದೊಡ್ಡ ಕಾಡನೂರಿನ ಸುನಿಲ್ (22), ಬಾಗಲಕೋಟೆ ಮೂಲದ ಬೆಂಗಳೂರಿನ ನರಗುಂದ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ ಶ್ರೀಶೈಲಂ (24) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸುನಿಲ್ ಸ್ನೇಹಿತ ವಿಜಯ್ ಸೇರಿದಂತೆ ಟೆಂಪೊ ಟ್ರಾವಲರ್ನಲ್ಲಿದ್ದ ಎಂಟು ಮಂದಿ ಹಾಗೂ ಬೈಕ್ ನಲ್ಲಿ ಬರುತ್ತಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ, ಕಾರು ಚಾಲನೆ ಮಾಡುತ್ತಿದ್ದ ಸುನಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದು, ಟೆಂಪೋ ಟ್ರಾವಲರ್ ವಾಹನದಲ್ಲಿ ನಾಗಮಂಗಲ ತಾಲೂಕಿನ ರಾಮೇಗೌಡರ ಕುಟುಂಬದವರು, ರಾಮೇಗೌಡರ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ಬೆಂಗಳೂರು ಕಡೆಗೆ ಹೊರಟಿದ್ದು ಇವರ ಹಿಂದೆ, ಹಾಸನದ ಭಕ್ತಕುಮಾರ, ಪ್ರೇಮಕುಮಾರ ಎಂಬ ಸಹೋದರರು ಬುಲೆಟ್ ಬೈಕ್ ನಲ್ಲಿ ಬೆಂಗಳೂರಿನ ಕಡೆ ಹೋಗುತ್ತಿದ್ದರು.
ಶನಿವಾರ ಬೆಳಗಿನ ಜಾವ ಮೂರುವರೆ ಗಂಟೆ ಸಮಯದಲ್ಲಿ ಕುಣಿಗಲ್ ಪಟ್ಟಣದ ಬೈಪಾಸ್ ರಸ್ತೆಯ ಬೇಗೂರು ಗ್ರಾಮದ ಸಮೀಪ ಕಾರಿನ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ಪಥದಲ್ಲಿ ಬರುತ್ತಿದ್ದ ಟೆಂಪೋ ಟ್ರಾವಲರ್, ಬುಲೆಟ್ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಕಾರಣ ಕಾರಿನಲ್ಲಿದ್ದ ಸುನಿಲ್, ಶ್ರೀಶೈಲಂ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸರು ತಡರಾತ್ರಿಯೆ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಿ, ಅಪಘಾತದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು, ಕಳೆದ ಹದಿನೈದು ದಿನದ ಹಿಂದೆ ಇದೆ ಜಾಗದಲ್ಲಿ ಕಾರೊಂದು ವಿರುದ್ಧ ಪಥಕ್ಕೆ ಹಾರಿ ಬಿದ್ದು ಮೂವರು ಯುವಕರು ಮೃತಪಟ್ಟು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!