ಚಿರತೆ ದಾಳಿಗೆ 8 ಕುರಿ ಬಲಿ

195

Get real time updates directly on you device, subscribe now.

ಗುಬ್ಬಿ: ತಾಲೂಕಿನ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ 8 ಕ್ಕೂ ಹೆಚ್ಚು ಕುರಿ ಬಲಿಯಾಗಿವೆ.

ಶಿವಣ್ಣ ಎಂಬ ರೈತರಿಗೆ ಸೇರಿದ್ದ ರೊಪ್ಪದಲ್ಲಿ ಕಟ್ಟಿದ್ದ ಕುರಿಗಳ ಮೇಲೆ ಚಿರತೆಯೊಂದು ದಾಳಿ ಮಾಡಿ ಕುರಿಗಳನ್ನು ಬಲಿ ಪಡೆದಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಶಿವಣ್ಣ ಮಾಹಿತಿ ನೀಡಿದರು.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಭೇಟಿ ನೀಡಿ ಸರ್ಕಾರದಿಂದ ಬರಬೇಕಾದ ಪರಿಹಾರದ ಹಣ ನೀಡಲಾಗುತ್ತದೆ, ಗುಬ್ಬಿ, ಕುಣಿಗಲ್ ಗಡಿ ಭಾಗದಲ್ಲಿ ಚಿರತೆ ಕಂಡುಬರುತ್ತಿವೆ, ಅವುಗಳನ್ನು ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!