ಗ್ಯಾಸ್ ಸಿಲಿಂಡರ್ ಸ್ಪೋಟ 20 ಅಡಿಕೆ ಚೀಲ ಬೆಂಕಿಗಾಹುತಿ

297

Get real time updates directly on you device, subscribe now.


ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಕಳ್ಳಿಪಾಳ್ಯ ಗ್ರಾಮದ ಉಮೇಶ್ ಚಿಕ್ಕತಿಮ್ಮಯ್ಯ ಎಂಬ ರೈತರ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಮಂಗಳವಾರ ರಾತ್ರಿ ಸ್ಪೋಟಗೊಂಡು ಮನೆಯಲ್ಲಿದ್ದ 20 ಕ್ವಿಂಟಾಲ್ ಅಡಕೆ, 5 ಕ್ವಿಂಟಾಲ್ ರಾಗಿ, 10 ಕ್ವಿಂಟಾಲ್ ಶೇಂಗಾ ಸೇರಿದಂತೆ ದವಸ ದಾನ್ಯಗಳು, ಬಟ್ಟೆಗಳು ಸುಟ್ಟುಹೋಗಿವೆ.
ಮಂಗಳವಾರ ರಾತ್ರಿ 8.30ರ ಸುಮಾರಿಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡು ಮನೆಯು ಬೆಂಕಿಯಿಂದ ಹತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 10 ರಿಂದ 15 ಲಕ್ಷ ರೂ.ಗಳ ನಷ್ಟವಾಗಿದ್ದು, ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ

Get real time updates directly on you device, subscribe now.

Comments are closed.

error: Content is protected !!