ಕರಡಿ ದಾಳಿ- ಜೇನು ಸಾಕಾಣಿಕೆ ಪೆಟ್ಟಿಗೆ ನಾಶ

201

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಕರಡಿಗೆರೆ ಗ್ರಾಮದಲ್ಲಿ ಜೇನು ಕಸಿಯಲು ಬಂದ ಕರಡಿಯೊಂದು 6 ಜೇನು ಸಾಕಾಣಿಕ ಪೆಟ್ಟಿಗೆ ನಾಶ ಪಡಿಸಿದೆ.
ತಾಲೂಕಿನ ಕರಡಿಗೆರೆ ಗ್ರಾಮದ ರೈತ ಕಿರಣ್ಕುಮಾರ್ ತಮ್ಮ ತೋಟದಲ್ಲಿ ಕಳೆದ 6 ತಿಂಗಳಿನಿಂದ ಜೇನು ಸಾಕಾಣಿಕೆಯಲ್ಲಿ ತೊಡಗಿದ್ದರು. ಕಳೆದ ವಾರವಷ್ಟೇ ಕರಡಿ ಜೇನು ಕಸಿಯಲು ಬಂದು ಒಂದು ಜೇನು ಸಾಕಾಣಿಕೆ ಪೆಟ್ಟಿಗೆ ಧ್ವಂಸಗೊಳಿಸಿತ್ತು. ಕಳೆದ ಬುಧವಾರ ರಾತ್ರಿ ಮತ್ತೆ ದಾಳಿ ಮುಂದುವರೆಸಿರುವ ಕರಡಿ 6 ಜೇನು ಸಾಕಾಣಿಕೆ ಪೆಟ್ಟಿಗೆ ಧ್ವಂಸಗೊಳಿಸಿ ಜೇನು ತುಂಬಿದ ಹುಟ್ಟಿಯನ್ನು ಕಸಿದು ಕಾಲ್ಕಿತ್ತಿದೆ. ಎಂದಿನಂತೆ ಬೆಳಗ್ಗೆ ತೋಟದ ಬಳಿ ಬಂದ ರೈತ ಕಿರಣ್ಕುಮಾರ್ ಅವರು ಜೇನು ಸಾಕಾಣಿಕೆ ಪೆಟ್ಟಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಕರಡಿ ದಾಳಿಯಿಂದಾಗಿರುವ ನಷ್ಟ ಭರಿಸುವುದರ ಜೊತೆಗೆ ಮುನುಷ್ಯರ ಮೇಲೆ ದಾಳಿ ನಡೆಸುವ ಮುನ್ನ ಕರಡಿಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯವರನ್ನು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!