ಹರಿದಾಸನಹಳ್ಳಿ ಡೇರಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

119

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಹರಿದಾಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹರೀಶ್ .ಹೆಚ್.ಆರ್. ಉಪಾಧ್ಯಕ್ಷರಾಗಿ ಶಿವಣ್ಣ ಎಂ. ಅವಿರೋಧವಾಗಿ ಆಯ್ಕೆಯಾದರು.
ಹರಿದಾಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 11 ಮಂದಿ ನಿರ್ದೇಶಕ ಬಲವಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಹರೀಶ್ ಹೆಚ್.ಆರ್. ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಶಿವಣ್ಣ.ಎಂ. ಕಣಕ್ಕಿಳಿದರು. ಅಂತಿಮವಾಗಿ ಕಣದಲ್ಲಿ ಉಳಿದ ಹರೀಶ್.ಹೆಚ್.ಆರ್.ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರನ್ನಾಗಿ ಶಿವಣ್ಣ.ಎಂ. ಅವರನ್ನು ರಿಟರ್ನಿಂಗ್ ಆಫೀಸರ್ ರಂಗನಾಥ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಹರೀಶ್.ಹೆಚ್.ಆರ್. ಮಾತನಾಡಿ, ಎಲ್ಲಾ ನಿರ್ದೇಶಕರು ನನ್ನ ಮೇಲೆ ಭರವಸೆ ಇಟ್ಟು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಅವರು ನನ್ನ ಮೇಲೆ ಇರಿಸಿರುವ ಭರವಸೆಯನ್ನು ಸಂಘದ ಶ್ರೇಯೋಭಿವೃದ್ಧಿ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಿ ಉಳಿಸಿಕೊಳ್ಳುತ್ತೇನೆ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕಟಗೊಳುತ್ತಿದ್ದಂತೆ ಸಂಘದ ಸದಸ್ಯರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಹ ನಿರ್ದೇಶಕರಾದ ಶಿವಣ್ಣ, ರಾಜಕುಮಾರ್, ಶಿವಣ್ಣ, ಮಹಾಲಿಂಗಯ್ಯ, ಆರ್.ಶಿವಣ್ಣ, ಸಾವಿತ್ರಮ್ಮ, ಮುಖಂಡರಾದ ರವಿಕುಮಾರ್, ಕೋಳಾಲ ರಘು, ಹರಿದಾಸನಹಳ್ಳಿ ಶಶಿಧರ್ ಶುಭ ಕೋರಿದರು.

Get real time updates directly on you device, subscribe now.

Comments are closed.

error: Content is protected !!