ಆಮ್ ಆದ್ಮಿ ಪಕ್ಷದಿಂದ ನಿರ್ಗತಿಕರಿಗೆ ಕಂಬಳಿ ವಿತರಣೆ

192

Get real time updates directly on you device, subscribe now.


ತುಮಕೂರು: ಡಾ.ಇಂಡಿಯಾ ಚಾರಿಟಬಲ್ ಟ್ರಸ್ಟ್ ಹಾಗೂ ಆಮ್ ಆದ್ಮಿ ಪಕ್ಷದ ವತಿಯಿಂದ ತುಮಕೂರಿನ ಟೌನ್ ಹಾಲ್ ಸುತ್ತಮುತ್ತ ಮತ್ತು ರೈಲ್ವೆಸ್ಟೇಷನ್ ಸಮೀಪ ರಸ್ತೆ ಬದಿ ಕೆಲಸ ಮಾಡುವ ನಿರ್ಗತಿಕರಿಗೆ ಕಂಬಳಿ ಮತ್ತು ಬೆಡ್ಶೀಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಗರ ಆಕಾಂಕ್ಷಿ ಗೌಸ್ಪೀರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಚಳಿಗಾಲದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ರಸ್ತೆ ಬದಿಯಲ್ಲಿ ಮಲಗುವ ಬಡವರಿಗೆ ಕಂಬಳಿ ಮತ್ತು ಬೆಡ್ ಶೀಟ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಚಳಿಗಾದಲ್ಲಿ ಬೀದಿಬದಿಯಲ್ಲಿ ಮಲಗುವವರಿಗೆ ಸೊಳ್ಳೆ ಕಚ್ಚಿ ಅವರಿಗೆ ಅನಾರೋಗ್ಯ ಕಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ನಿರ್ಗತಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ವಲಸೆ ಕಾರ್ಮಿಕರಿಗೆ ಕಂಬಳಿ ಮತ್ತು ಬೆಡ್ ಶೀಟ್ ನೀಡಿದರೆ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿದೆ, ಹಾಗಾಗಿ ಇವರಿಗೆ ಡಾ.ಇಂಡಿಯಾ ಚಾರಿಟಬಲ್ ಟ್ರಸ್ಟ್ ಮತ್ತು ಆಮ್ ಆದ್ಮಿ ಪಕ್ಷ ಸಹಾಯ ಮಾಡಲಿದೆ ಎಂದರು.
ಈ ವೇಳೆ ಪಕ್ಷದ ಸಂಘಟನಾ ಕಾರ್ಯದರ್ಶಿ ಉಮರ್ ಫಾರೂಕ್, ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಮೊಹಮ್ಮದ್ ಯೂನೂಸ್, ಮಹಿಳಾ ಘಟಕದ ನಗರ ಅಧ್ಯಕ್ಷೆ ನಂದಿನಿ ಹಾಗೂ ರುಕ್ಸಾನ ಬಾನು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!