ವಾರಸುದಾರರಿಲ್ಲದ ಹಣ ಪೊಲೀಸರ ವಶಕ್ಕೆ

219

Get real time updates directly on you device, subscribe now.


ಶಿರಾ: ಇಲ್ಲಿನ ಕೋರ್ಟ್ ಆವರಣದಲ್ಲಿ ಸಿಕ್ಕ ವಾರಸುದಾರರಿಲ್ಲದ ಹಣವನ್ನು ಪೊಲೀಸರಿಗೆ ಒಪ್ಪಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು, ನಗದಿನ ವಾರಸುದಾರರ ಪತ್ತೆ ಮಾಡುವಂತೆ ಸೂಚಿಸಿದ್ದಾರೆ.

ಬೆಳ್ಳಂಬೆಳಗ್ಗೆ ಇಲ್ಲಿನ ನ್ಯಾಯಾಲಯ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೌಕರ ಈಶ್ವರ್ ಭಜಂತ್ರಿ ಎಂಬುವರಿಗೆ ಮೊದಲ ಮಹಡಿಗೆ ಹೋಗುವ ಮೆಟ್ಟಿಲ ಸಮೀಪ ಕಿಟಕಿಯಲ್ಲಿ ಪ್ಲಾಸ್ಟಿಕ್ ಡಬ್ಬಿಯೊಂದು ಕಂಡು ಬಂದಿದೆ. ಡಬ್ಬಿಯನ್ನು ಪರಿಶೀಲಿಸಿದ ನೌಕರ ಅದರಲ್ಲಿ ಹಣ ಇರುವುದನ್ನು ಕಂಡು ವಿಷಯವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಅವರ ಗಮನಕ್ಕೆ ತಂದಿದ್ದಾನೆ.

ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ ನ್ಯಾಯಾಧೀಶರು ಹಣದ ವಾರಸುದಾರರನ್ನು ಹುಡುಕುವಂತೆ ಸೂಚಿಸಿ ಹಣದ ಡಬ್ಬಿಯನ್ನು ನಗರ ಠಾಣೆ ಸಿಪಿಐ ಹನುಮಂತಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ. ಡಬ್ಬಿಯಲ್ಲಿದ್ದ ಹಣವನ್ನು ಎಣಿಸಿದ ಪೊಲೀಸರು ಅದರಲ್ಲಿ 5850 ರೂ. ಇತ್ತು ಎಂದು ತಿಳಿಸಿದ್ದು, ಹಣದ ವಾರಸುದಾರರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!