2023ಕ್ಕೆ ಕುಮಾರಣ್ಣ ಸಿಎಂ ಆಗೋದು ಖಚಿತ: ಲಾಲ್

219

Get real time updates directly on you device, subscribe now.


ಕೊರಟಗೆರೆ: 2023ಕ್ಕೆ ಕುಮಾರಣ್ಣ ಕರ್ನಾಟಕದ ಮುಖ್ಯಮಂತ್ರಿ ಆಗೋದು ಖಚಿತ. ಕರ್ನಾಟಕ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ಕೊರಟಗೆರೆ ಕ್ಷೇತ್ರದಲ್ಲಿಯು ಪಂಚರತ್ನ ರಥಯಾತ್ರೆ ಯಶಸ್ವಿ ಕಂಡಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಜಾತ್ಯಾತೀತ ಯುವ ಜನತಾದಳ ಮತ್ತು ಅಲ್ಪಸಂಖ್ಯಾತರ ಘಟಕದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಹೆಚ್ಡಿಕೆ ಕಪ್ ಅಂತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ಅಭಿವೃದ್ಧಿಯ ಪಂಚರತ್ನ ಎಂದರೆ ವಸತಿ ಸೌಲಭ್ಯ, ಆರೋಗ್ಯ ಭಾಗ್ಯ, ಹೈಟೆಕ್ ಶಾಲೆ, ರೈತ ಚೈತನ್ಯ, ಮಹಿಳೆಯರ ಸಬಲೀಕರಣ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವುದು ಆಗಿದೆ. ರೈತಪರ ಮತ್ತು ಜನಪರ ಕಾಳಜಿಯುಳ್ಳ ಕುಮಾರಣ್ಣನಿಗೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಜೆಡಿಎಸ್ ನಗರ ಯುವ ಅಧ್ಯಕ್ಷ ಫಾರುಕ್, ಅಲ್ಪಸಂಖ್ಯಾತರ ಘಟಕದ ಯುವಾಧ್ಯಕ್ಷ ಅಜ್ಜು, ಉಪಾಧ್ಯಕ್ಷ ಜಬೀವುಲ್ಲಾ, ರಾಜೀಕ್ ಅಹಮ್ಮದ್, ಮುಖಂಡರಾದರಮೇಶ್, ಅಮರ್, ಕೌಶಿಕ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!