ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ: ಶ್ರೀನಿವಾಸ್

184

Get real time updates directly on you device, subscribe now.


ಗುಬ್ಬಿ: ಚುನಾವಣೆಯಲ್ಲಿ ನನ್ನ ಕಾರ್ಯಕರ್ತರು ನನ್ನನ್ನು ಗೆಲ್ಲಿಸುತ್ತಾರೆ. ಅವರು ಕಾಂಗ್ರೆಸ್ ಬೇಡ ಎಂದರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಮಹಾಲಕ್ಷ್ಮಿ ನಗರದಲ್ಲಿ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ 3.40 ಲಕ್ಷ ರೂ.ಗಳ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಾನು ವೀರಶೈವ ಮತ ಬೇಡ ಎಂದು ಎಲ್ಲಿಯೂ ಹೇಳಿಲ್ಲ. ನನಗೆ ಎಲ್ಲಾ ಸಮುದಾಯದವರು ಬೆಂಬಲ ನೀಡಿದ್ದಾರೆ. ಯಾವ ಸಮುದಾಯದ ವಿರೋಧಿಯು ನಾನಲ್ಲ. ಲಿಂಗಾಯತ ಸಮುದಾಯದ ಎಲ್ಲಾ ಗ್ರಾಮಗಳಲ್ಲು ಅಭಿವೃದ್ಧಿ ಮಾಡಿದ್ದೇನೆ. ಅವರು ಮಾಡಿಲ್ಲ ಎಂದರೆ ಅದು ಅವರ ತಪ್ಪು ಭಾವನೆಯಾಗಿದೆ ಎಂದರು.

ನನ್ನ ಮುಂದೆ ನೂರು ಜನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ನಿಂತರು ನಾನು ಹೆದರುವುದಿಲ್ಲ. ನಾನಂತೂ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ನನ್ನ ಕಾರ್ಯಕರ್ತರು ಹಾಗೂ ಮತದಾರರು ಹೇಳಿದ ಹಾಗೆ ಕೇಳುತ್ತೇನೆ. ನಾನು ಬೇರೆಯವರ ಮಾತು ಕೇಳುವುದಿಲ್ಲ. ಹಾಗಲವಾಡಿ ಹೋಬಳಿ ಶಿವನಹಳ್ಳಿ ಗ್ರಾಮದ ಮುಖಂಡರು ನನ್ನ ಹತ್ತಿರ ಬಂದಿರುವುದಿಲ್ಲ. ನಾನು ಸಹ ಆ ಊರಿಗೆ ಹೋಗಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಕುಮಾರ್, ಸಿ.ಮೋಹನ್, ರಂಗಸ್ವಾಮಿ, ರೇಣುಕಾ ಪ್ರಸಾದ್, ಮಮತಾ, ಮಂಗಳಮ್ಮ, ಮುಖಂಡರಾದ ಶಿವಪ್ಪ, ಸತೀಶ್, ಮಧು, ಗುತ್ತಿಗೆದಾರರಾದ ಮನೋಜ್ ಸೇರಿದಂತೆ ವಾಸಣ್ಣ ಅಭಿಮಾನಿ ಬಳಗದ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!