ವಾಸಣ್ಣ ಅಭಿಮಾನಿಗಳಿಂದ ಜೆಡಿಎಸ್ಗೆ ರಾಜಿನಾಮೆ

119

Get real time updates directly on you device, subscribe now.


ಗುಬ್ಬಿ: ತಾಲೂಕಿನ ಎಂ.ಹೆಚ್.ಪಟ್ಟಣ ಗ್ರಾಮದಲ್ಲಿ ವಾಸಣ್ಣ ಅಭಿಮಾನಿಗಳಿಂದ ಮುಂದುವರೆದ ಜೆಡಿಎಸ್ ರಾಜಿನಾಮೆ ಪರ್ವ.

ಪ್ರತಿ ಶನಿವಾರ ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ರಾಜಿನಾಮೆ ನೀಡುವಂತಹ ವಾಸಣ್ಣ ಅಭಿಮಾನಿಗಳದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ರಾಜಿನಾಮೆ ನೀಡಿದರು.

ಈ ಸಂದರ್ಭದಲ್ಲಿ ವಾಸಣ್ಣ ಅಭಿಮಾನಿಗಳಾದ ವಾಸಣ್ಣ ನರಸಿಂಹಮೂರ್ತಿ ಮಾತನಾಡಿ, ವಾಸಣ್ಣ ಯಾವ ಕಡೆ ಹೋಗುತ್ತಾರೋ ನಾವು ಅಲ್ಲಿಗೆ ತೆರಳುತ್ತೇವೆ. ವಾಸಣ್ಣ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಸರಿ, ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ನಾವೆಲ್ಲ ಅವರ ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು.

ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ ಮಾತನಾಡಿ, ಇಪ್ಪತ್ತು ವರ್ಷಗಳಲ್ಲಿ ಯಾವುದೇ ರೀತಿಯ ತಾಲೂಕಿನಲ್ಲಿ ಸಮಸ್ಯೆ ಇಲ್ಲದಂತೆ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ರೈತರ ಕಷ್ಟ ಸುಖ, ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದಾದ ಶಾಸಕರೆಂದರೆ ಅದು ನಮ್ಮ ಗುಬ್ಬಿ ಶಾಸಕರು ಮಾತ್ರ ಎಂಬ ಹೆಮ್ಮೆ ನಮಗಿದೆ ಎಂದು ತಿಳಿಸಿದರು.

ಮುಖಂಡ ದೇವರಾಜು ಮಾತನಾಡಿ, ಮುಂದಿನ ದಿನದಲ್ಲಿ ಶಾಸಕರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಭಾಗಿಯಾಗಿ ಅವರಿಗೆ ದುಡಿಯುತ್ತೇವೆ. ಜೆಡಿಎಸ್ ಪಕ್ಷದಲ್ಲಿ 3 ಬಾರಿ ಗೆದ್ದಿರುವ ಶ್ರೀನಿವಾಸ್ ಅವರಿಗೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷ ಮೋಸ ಮಾಡಿದ್ದು, ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನರಸಿಂಹಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಶಶಿಧರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮಿತ್ರ, ಮುಖಂಡರಾದ ವೆಂಕಟೇಶ್, ಪದ್ಮ ನಾಗೇಶ್, ಯೋಗೀಶ್ ಗೌಡ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!