ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ಸುರೇಶ್ ಗೌಡ

90

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಗೆ ತನ್ನದೇ ಘನತೆ, ಗೌರವವಿದೆ, ಹೊರ ಜಿಲ್ಲೆಯಿಂದ ರೌಡಿಸಂ ಎಳೆದು ತರುವ ಜನರಿಗೆ ಇಲ್ಲಿಯ ಜನರೇ ಉತ್ತರ ನೀಡುಬೇಕು ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು.

ಜೆಡಿಎಸ್ ಪಂಚರತ್ನ ರಥಯಾತ್ರೆಯ ವೇಳೆ ಪಕ್ಷದ ಕಾರ್ಯಕರ್ತನ ಮೇಲೆ ಶಾಸಕ ಗೌರಿಶಂಕರ್ ಅವರ ಕುಮ್ಮಕ್ಕಿನಿಂದ ಅವರ ಪಿಎ ಸುರೇಶ್ ಹಾಗೂ ಬೆಂಬಲಿಗರು ಥಳಿಸಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆ ವೇಳೆ ಮಾತನಾಡಿ, ಗ್ರಾಮಾಂತರ ಕ್ಷೇತ್ರವು ಶಾಂತಿಯ ಕೈತೋಟ, ಸಮೃದ್ಧಿಯ ನೆಲೆಯಾಗಿರಬೇಕೆಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಹೊರಗಿನಿಂದ ಬಂದಿರುವ ಕೆಲವು ಜನರು ಹಿಂಸೆ ಪ್ರಚೋದಿಸಲು ಮಾಡುತ್ತಿರುವ ಪ್ರಯತ್ನವನ್ನು ಗ್ರಾಮಾಂತರದ ಜನರು ವಿಫಲಗೊಳಿಸುತ್ತಾರೆ ಎಂದರು.

ಶಾಂತಿ, ಸೌಹಾರ್ದತೆ ಗ್ರಾಮಾಂತರ ಮಣ್ಣಿನ ಗುಣವಾಗಿದೆ. ಇಂಥ ನೆಲದಲ್ಲಿ ಕೊಲೆ, ಸುಲಿಗೆ, ಹಲ್ಲೆಗಳಿಗೆ ನಮ್ಮ ಜನರು ಅವಕಾಶ ಕೊಡಲಾರರು. ಹಿಂದಿನ ಹತ್ತು ವರ್ಷದ ಅವಧಿಯಲ್ಲಿ ಕ್ಷೇತ್ರ ಶಾಂತಿಯುತವಾಗಿತ್ತು. ಕಳೆದ ಐದು ವರ್ಷಗಳಿಂದ ಹಲ್ಲೆ, ಅಧಿಕಾರಿಗಳಿಂದ ಸುಲಿಗೆ, ಬೆದರಿಕೆ, ಹಫ್ತಾ ವಸೂಲಿ ಮಾಡಲಾಗುತ್ತಿದೆ. ಹೊರಗಿನ ರೌಡಿಗಳನ್ನು ಕರೆತಂದು ಜನರನ್ನು ಹೆದರಿಸಿ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ತನ್ನ ಹೆಂಡತಿಯೊಂದಿಗೆ ಇದ್ದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಹಾಗೂ ಒಂದು ಜನಾಂಗವನ್ನು ಕೀಳಾಗಿ ಹೀಯಾಳಿಸುವುದನ್ನು ಬಲವಾಗಿ ಖಂಡಿಸಿ ಈ ಮೌನ ಧರಣಿ ನಡೆಸಿದ್ದೇನೆ. ಕಾರ್ಯಕರ್ತರ ಮೇಲೆ ಹಲ್ಲೆ, ಒಂದು ಜನಾಂಗವನ್ನು ಕೀಳಾಗಿ ಹೀಯಾಳಿಸುವುದು ಸೇರಿದಂತೆ ಹಲವಾರು ಸಮಾಜ ವಿರೋಧಿ ಕೃತ್ಯ ನಡೆಯುತ್ತಿದ್ದು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟೌನ್ ಹಾಲ್ ವೃತ್ತದಿಂದ ಡಿಸಿ ಕಚೇರಿ ವರೆಗೂ ಮೌನ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಮ್ಮ, ಒಬಿಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಓಂ ನಮೋ ನಾರಾಯಣ, ಎಸ್ಟಿ ಮೋರ್ಚಾ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಗಂಗಾ ಆಂಜನಪ್ಪ, ಕಂಟಪ್ಪ ಗಿರೀಶ್, ನಟರಾಜ್ ಅಲ್ಪಸಂಖ್ಯಾಾತ ಮೋರ್ಚಾ ಅಧ್ಯಕ್ಷ ನಿಶಾಂತ್ ಖಾನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!