ರೈತ ದಂಪತಿಗಳ ಮೇಲೆ ಹೆಜ್ಜೇನು ದಾಳಿ

375

Get real time updates directly on you device, subscribe now.


ತುರುವೇಕೆರೆ: ಹೆಜ್ಜೇನು ದಾಳಿಗೆ ಸಿಲುಕಿ ಕೃಷಿಕ ದಂಪತಿಗಳು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ದಂಡಿನ ಶಿವರ ಹೋಬಳಿ ಹುಲ್ಲೇಕೆರೆಯಲ್ಲಿ ನಡೆದಿದೆ.

ಹುಲ್ಲೇಕೆರೆ ಗ್ರಾಮದ ರೈತ ಸದಯ್ಯ ಪತ್ನಿ ಗೌರಮ್ಮ ಅವರೊಂದಿಗೆ ಹಟ್ಟೀಹಳ್ಳಿ ಸಮೀಪದ ತಮ್ಮ ತೋಟದಲ್ಲಿ ಅಡಕೆ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಹೆಜ್ಜೇನು ಏಕಾಏಕಿ ದಾಳಿ ನಡೆಸಿವೆ. ರೈತ ದಂಪತಿಗಳ ಚೀರಾಟ ಕೇಳಿದ ದಾರಿಹೋಕರು ಹಾಗೂ ಅಕ್ಕ ಪಕ್ಕದ ಜಮೀನಿನ ಕೃಷಿಕರು ಸಹಾಯಕ್ಕೆ ಧಾವಿಸಿದ್ದಾರೆ .ದಂಪತಿಗಳನ್ನು ದಂಡಿನಶೀವರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ದೊರಕಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!