ಮೊಬೈಲ್ ಬಿಡು ಅಂದ್ರೆ ಮನೆ ಬಿಟ್ಟ ಯುವಕ

218

Get real time updates directly on you device, subscribe now.


ಕುಣಿಗಲ್: ಸದಾ ಮೊಬೈಲ್ನಲ್ಲೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ಮಗನಿಗೆ ಪೋಷಕರು ಬುದ್ಧಿವಾದ ಹೇಳಿದಕ್ಕೆ 21 ವರ್ಷದ ಯುವಕ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಪಟ್ಟಣದ 18ನೇ ವಾರ್ಡ್ನಲ್ಲಿ ವಾಸವಾಗಿರುವ ಕುಮಾರ್ ಅವರಿಗೆ ಮನೋಜ ಎಂಬ 21 ವಯಸ್ಸಿನ ಮಗನಿದ್ದು, ಶಾಲಾ ವ್ಯಾಸಂಗ ಬಿಟ್ಟಿದ್ದ ಮಗ ತಂದೆಯ ಕೆಲಸಕ್ಕೆ ನೆರವಾಗುತ್ತಿದ್ದ. ಆದರೆ ಮಗ ಸದಾ ಮೊಬೈಲ್ನಲ್ಲೆ ಕಾಲ ಕಳೆಯುತ್ತಾ ಗೇಮ್ ಆಡುತ್ತಿದ್ದ ಇದರಿಂದ ಬೇಸರಗೊಂಡ ತಂದೆ ಕುಮಾರ್ ಜನವರಿ ಐದರಂದು ಮಗನಿಗೆ ಬೈಯ್ದು ಬುದ್ಧಿ ಹೇಳಿ ಮೊಬೈಲ್ ಕಸಿದು ಕೊಂಡು ಮರುದಿನ ಬೆಳಗ್ಗೆ ಹೆಚ್ಚಾಗಿ ಮೊಬೈಲ್ನಲ್ಲೆ ಕಾಲ ಕಳೆಯದಂತೆ ತಾಕೀತು ಮಾಡಿ ಮೊಬೈಲ್ ನೀಡಿ ಕೆಲಸಕ್ಕೆ ಹೋದರು. ಆದರೆ ಸಂಜೆ ಬಂದ ನಂತರ ಮನೋಜ್ ಬೆಳಗ್ಗೆ ಮನೆ ಬಿಟ್ಟು ಹೋಗಿದ್ದು ಬಂದಿಲ್ಲ ಎಂದು ಮನೆಯಲ್ಲಿ ತಿಳಿಸಿದ ಮೇರೆಗೆ ಆತನ ಫೋನ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಅಗಿದೆ. ಮಗ ನಾಪತ್ತೆಯಾಗಿದ್ದು ಹುಡುಕಿ ಕೊಡುವಂತೆ ಆತನ ತಂದೆ ಕುಣಿಗಲ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!