ಕಟ್ಟೆಯಲ್ಲಿ ಮುಳುಗಿ ಯುವ ದಂಪತಿಗಳ ಸಾವು

260

Get real time updates directly on you device, subscribe now.


ತುರುವೇಕೆರೆ: ತಾಲ್ಲೂಕಿನ ಮುಗಳೂರು ಗೊಲ್ಲರಹಟ್ಟಿಯ ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯಲೆಂದು ಹೋದ ಯುವ ದಂಪತಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮುಗಳೂರು ಗೊಲ್ಲರಹಟ್ಟಿಯ ಜುಂಜೇಗೌಡ(30) ಆತನ ಪತ್ನಿ ಶಿವಲಿಂಗಮ್ಮ (27) ಮೃತ ದುರ್ದೈಗಳಾಗಿದ್ದಾರೆ. ಮುಗಳೂರು ಗೊಲ್ಲರಹಟ್ಟಿಯ ಹೊರವಲಯದಲ್ಲಿರುವ ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯಲು ಮಂಗಳವಾರ ಮದ್ಯಾಹ್ನ ಯುವ ದಂಪತಿಗಳು ತೆರಳಿದ್ದಾರೆ. ಕುರಿಗಳನ್ನು ಮೈ ತೊಳೆಯಲು ನೀರಿಗಿಳಿದಿದ್ದ ಜುಂಜೇಗೌಡ ಆಯತಪ್ಪಿ ನೀರಿನಲ್ಲಿ ಮುಳುಗಿರಬಹುದು. ಕಟ್ಟೆಯ ಬಳಿ ಇದ್ದ ಪತ್ನಿ ಶಿವಲಿಂಗಮ್ಮ ಗಂಡನ ರಕ್ಷಣೆಗೆ ಮುಂದಾದ ವೇಳೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಕಳೆದ 5 ವರ್ಷಗಳ ಹಿಂದೆ ಹಸೆಮಣೆ ಏರಿ ಒಂದಾಗಿದ್ದ ದಂಪತಿಗಳು ಕಾಲನ ಕರೆಗೆ ಒಟ್ಟಿಗೆ ಓಗೊಟ್ಟಿದ್ದಾರೆ.

ಹೊರವಲಯದ ಕಟ್ಟೆಯಲ್ಲಿ ಚಪ್ಪಲಿಗಳು ತೇಲುವುದನ್ನು ಕಂಡು ಸ್ಥಳೀಯರು ಅನುಮಾನಗೊಂಡ ಕಟ್ಟೆಯನ್ನು ಶೋಧಿಸಿದ ವೇಳೆ ದಂಪತಿಗಳ ಶವ ಗೋಚರಿಸಿವೆ ಎನ್ನಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ. ಲಕ್ಷ್ಮೀಕಾಂತ್, ಸಿ.ಪಿ.ಐ. ಗೋಪಾಲನಾಯ್ಕ, ಎಎಸ್ಐ ನಾಗರಾಜ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!